ಚಾಮುಂಡಿ ಸಿನಿಮಾ ಅರ್ಪಿಸುವ, ಚಾಮುಂಡಿ ಚಂದ್ರು ಅವರು ನಿರ್ಮಿಸಿರುವ ‘ಸುಪಾರಿ ಸೂರ್ಯ’ ಚಿತ್ರ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಆರ್.ರಘುರಾಜ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಶ್ರೀಧರ್ ವಿ ಸಂಭ್ರಮ್ ಸಂಗೀತ ನೀಡಿದ್ದಾರೆ. ನಂದಕುಮಾರ್ ಛಾಯಾಗ್ರಹಣ, ರವಿಚಂದ್ರನ್ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಹಾಗೂ ರಾಮು ನೃತ್ಯ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ವಿರಾಟ್, ಮಧುರಿಮಾ, ಸಾಧುಕೋಕಿಲ, ಶರತ್ ಲೋಹಿತಾಶ್ವ, ಉಗ್ರಂ ಮಂಜು, ಕುರಿ ಸುನೀಲ್, ಭವ್ಯ, ರಿಶಿತಾ, ಜುಲಾಯಿ ಮುಂತಾದವರಿದ್ದಾರೆ.